ಡಿ.ವಿ. ಗುಂಡಪ್ಪ | ||
ಸ್ವ-ವಿವರ | ||
ಕಾವ್ಯನಾಮ : | ಡಿವಿಜಿ | |
ನಿಜನಾಮ/ಪೂರ್ಣನಾಮ : | ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ. | |
ಜನನ : | ೧೮೮೭ ಮಾರ್ಚ್ ೧೭. | |
ಮರಣ : | ೧೯೭೫ ಅಕ್ಟೋಬರ್ ೭, ಬೆಂಗಳೂರು | |
ತಂದೆ : | ದೇವನಹಳ್ಳಿ ವೆಂಕಟರಮಣಯ್ಯ | |
ತಾಯಿ: | ಅಲಮೇಲು | |
ಜನ್ಮ ಸ್ಥಳ : | ಮುಳುಬಾಗಿಲು | |
ಮನೆ,ಮನೆತನ : | ||
ಪತ್ನಿ : | ಭಾಗೀರಥಮ್ಮ | |
ವಿವಾಹವಾದ ದಿನ : | ||
ಮಕ್ಕಳು : | ಬಿ.ಜಿ.ಎಲ್. ಸ್ವಾಮಿ, ಇಂದಿರಾ. | |
ವಿದ್ಯಾಭ್ಯಾಸ : | ||
ಪ್ರಾಥಮಿಕ : | ಮುಳುಬಾಗಿಲು. | |
ಪ್ರೌಢಶಾಲೆ : | ಕೋಲಾರ ಮತ್ತು ಮೈಸೂರು. | |
ಕಾಲೇಜು: | ||
ವೃತ್ತಿ: | ||
ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭ. | ||
೧೯೦೭ರಲ್ಲಿ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದರು. | ||
ಸೂರ್ಯೋದಯ ಪ್ರಕಾಶಿಕಾ, ಮೈಸೂರು ಸ್ಟಾಂಡರ್ಡ್, ಈವನಿಂಗ್ ಮೈಲ್, ಮೈಸೂರು ಟೈಮ್ಸ್. ಪತ್ರಿಕೆಗಳಲ್ಲಿ ಕೆಲಸ ಮಾಡಿ ಮದರಾಸಿಗೆ ಹೋಗಿ ಅಲ್ಲಿನ ಪತ್ರಿಕೆಗಳಿಗೆ ಕೆಲಕಾಲ ದುಡಿದರು. | ||
೧೯೧೩ರಲ್ಲಿ ಬೆಂಗಳೂರಿಗೆ ಬಂದು ತಾವೇ ಕರ್ನಾಟಕ ಎಂಬ ಅರ್ಧವಾರಪತ್ರಿಕೆಯನ್ನು ಪ್ರಾರಂಭಿಸಿದರು. | ||
೧೯೨೧ರಲ್ಲಿ ಇಂಡಿಯನ್ ರೆವ್ಯೂ ಆಫ್ ರೆವ್ಯೂಸ್ ಎಂಬ ಆಂಗ್ಲ ಮಾಸಪತ್ರಿಕೆ ಪ್ರಾರಂಭಿಸಿದರು. | ||
೧೯೨೩ರ ನಂತರ ಕರ್ನಾಟಕ ಜನಜೀವನ ಮತ್ತು ಅರ್ಥಸಾಧಕ ಎಂಬ ಪತ್ರಿಕೆ ನಡೆಸಿದರು. ಹೀಗೆ ಪತ್ರಿಕೋದ್ಯಮಕ್ಕೆ ನಾನಾ ಕೊಡುಗೆಯನ್ನು ನೀಡಿದರು. | ||
ಸಾಹಿತ್ಯಕೃತಿಗಳು : | ||
ಕಥನಕವನಗಳು: | ಕುಗ್ಗಿದ ಮನಸ್ಸಿಗೆ ಸಾಂತ್ವನ ನೀಡುವಂತಹ ಮಹನ್ನೋತ ಕೃತಿ 'ಮಂಕುತಿಮ್ಮಕಗ್ಗ' ಅಪಾರ ಜನಮನ್ನಣೆ ಗಳಿಸಿತು. ಅದರ ಜೊತೆಗೆ 'ಮರುಳ ಸಿದ್ಧನ ಕಗ್ಗ'ವನ್ನು ಬರೆದರು. ಬಾಳಿಗೊದು ನಂಬಿಕೆ, ಸಾಹಿತ್ಯ ಶಕ್ತಿ-ಅನುವಾದಗಳು |
|
ಕಾವ್ಯ: | ವಸಂತಕುಸುಮಾಂಜಲಿ, ನಿವೇದನೆ. | |
ಕವನ ಸಂಕಲನಗಳು : | ಅಂತ:ಪುರ ಗೀತೆಗಳು, ಗೀತಶಾಕುಂತಲಂ. ಇತರ ಕೃತಿಗಳು-ಉಮರನ ಒಸುಗೆ, ಮ್ಯಾಕ್ ಬೆತ್, ಪದ್ಯಾನುವಾದಗಳು | |
ಪ್ರಬಂಧಗಳು: | ಜೀವನ ಸೌಂದರ್ಯ ಮತ್ತು ಸಾಹಿತ್ಯ. | |
ವಿಮರ್ಶಾ ಗ್ರಂಥಗಳು : | ಕಾವ್ಯ ಸೌಂದರ್ಯ ಮೀಮಾಂಸೆ, ದೇವರು, ಪುರುಷಸೂಕ್ತ, ಶ್ರೀಮದ್ಭಾಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮ ಯೋಗ, ಋತು-ಸತ್ಯ-ಧರ್ಮ, ಜ್ಞಾಪಕ ಶಾಲೆ, ಕಲೋಪಾಸಕರು, ಸಂಕೀರ್ಣ ಸ್ಮೃತಿ. | |
ಜೀವನ ಚರಿತ್ರೆ : | ಗೋಪಾಲಕೃಷ್ಣ ಗೋಖಲೆ, ವಿದ್ಯಾರಣ್ಯ ವೃತ್ತಾಂತ, ರಂಗಾಚಾರ್ಯಲು. | |
ಇನ್ನಿತರ ಕೃತಿಗಳು: | ಬೆಕ್ಕೋಜಿ, ತಿಲೋತ್ತಮೆ, ವೃತ್ತ ಪತ್ರಿಕೆ, ರಾಜ್ಯಾಂಗ ತತ್ವಗಳು, ರಾಜ್ಯ ಕುಟುಂಬ | |
ಪ್ರಶಸ್ತಿ, ಪುರಸ್ಕಾರ, ಬಿರುದು: | ||
೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್ ನೀಡಿತು. | ||
೧೯೬೭ರಲ್ಲಿ ಶ್ರೀಮದ್ಭಾಗವದ್ಗೀತಾ ತಾತ್ಪರ್ಯ ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. | ||
೧೯೩೬ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. | ||
೧೯೭೪ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿತು. | ||
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕುಸುಮಾಂಜಲಿ, ಧೀಮಂತ | ||
ಕವಿ ಸಂದೇಶ : | ||
ಸಾಹಿತ್ಯ ಗುಣವು ಮುಖ್ಯವಾಗಿ ಜನಜೀವನ ಗುಣದ ಪ್ರತಿಫಲ. ಲೇಖಕನಿಗೆ ಬೇಕಾಗಿರುವ ಕಾವ್ಯ ಹುರುಪು ಮುಖ್ಯವಾಗಿ ಅವನ ಸುತ್ತುಮುತ್ತಲಿರುವ ಸನ್ನಿವೇಶಗಳಿಂದ ದೊರೆಯಬೇಕು. ತನ್ನ ಲೇಖನಕ್ಕೆ ಜೀವ ಕೊಡುವ ಪ್ರವೃತ್ತಿಯನ್ನು ತನ್ನ ಪ್ರೇರಣೆಯನ್ನು ತನ್ನ ಸಮಾಜದಿಂದ ಅವನು ಸಂಪಾದಿಸಿಕೊಳ್ಳಬೇಕು. ಹೀಗಾಗಲು, ಆ ಸಮಾಜವು ಉತ್ಕರ್ಷಕಗಳಾದ ಪ್ರವೃತ್ತಿಗಳಿಂದಲೂ ಉಜ್ವಲಗಳಾದ ಪ್ರೇರಣೆಗಳಿಂದಲೂ ಕೂಡಿದ್ದಾಗಿರಬೇಕು. ನೂತನ ಸಂದೇಹ, ವಿಮರ್ಶನೆ, ನೂತನ ತತ್ವ ಪರಿಶೋಧನೆ- ಇವು ಲೇಖಕರಿಗೆ ಬೇಕಾದ ವಾತಾವರಣ. |