ಕುಮಾರವ್ಯಾಸ |
|
ಸ್ವ-ವಿವರ |
|
ಗದುಗಿನ ನಾರಾಯಣಪ್ಪ ಇವನ ಹೆಸರು. |
ಗದಗಿನ ಹತ್ತಿರದ ಕೋಳಿವಾಡದ ಶಾನುಭೋಗ ಮನೆತನಕ್ಕೆ ಸೇರಿದವನು. |
ಇವನ ಕಾಲ ಕ್ರಿ.ಶ. ೧೧೬೦. ಚಾಮರಸ, ರಾಘವಾಂಕನ ಸಮಕಾಲೀನ. |
ಗೋವಿಂದಪೈಗಳ ಪ್ರಕಾರ ಇವನ ಕಾಲ ಕ್ರಿ.ಶ.೧೩೩೦. ಇನ್ನೊಂದು ಮಾಹಿತಿ ಪ್ರಕಾರ ಕ್ರಿ.ಶ.೧೪೩೦. |
ಇವನ ಮಹಾಕಾವ್ಯ ಕರ್ಣಾಟ ಭಾರತ ಕಥಾಮಂಜರಿ ಇದಕ್ಕೆ ಕನ್ನಡ ಭಾರತ, ಗದುಗಿನ ಭಾರತ ಎಂಬ ಹೆಸರು ಇದೆ. |
ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತು ಪರ್ವಗಳನ್ನು ಕನ್ನಡಕ್ಕೆ ತಂದಿದ್ದಾನೆ. `ದಶಪರ್ವಭಾರತ' ಎಂದು ಕರೆಯುವುದುಂಟು. |
ಐರಾವತ ಎಂಬ ಗ್ರಂಥವನ್ನು ಬರೆದಿದ್ದಾನೆಂದು ಕೆಲವರ ಅಭಿಮತ. |
'ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿಯುವುದು' ಎಂದು ಕುವೆಂಪು ಹೊಗಳಿದ್ದಾರೆ. |