ನೃಪತುಂಗ | |
ಸ್ವ-ವಿವರ | |
ನೃಪತುಂಗ ರಾಷ್ಟ್ರಕೂಟ ವಂಶದ ರಾಜ. | |
ಈತನ ಕಾಲದಲ್ಲಿ ಬದಂಡೆ, ಚತ್ರಾಣ ಮುಂತಾದ ಕಾವ್ಯಭೇದಗಳಿದ್ದವು. | |
ಕನ್ನಡದ ಮೊದಲ ಕಾವ್ಯ ಕವಿರಾಜಮಾರ್ಗವನ್ನು ಈತನೇ ರಚಿಸಿದನೆಂದು ವಿದ್ವಾಂಸರ ಅಭಿಪ್ರಾಯ. | |
ಕವಿರಾಜಮಾರ್ಗ ಒಂದು ಶಾಸ್ತ್ರಗ್ರಂಥ. ಇದರಲ್ಲಿ ಕಾವ್ಯದೋಷಗಳು, ಅಲಂಕಾರಗಳು ವರ್ಣಿತವಾಗಿದೆ. | |
ಕಾವೇರಿಯಿಂದ ಗೋದಾವರಿಯವರೆಗೂ ಕನ್ನಡ ನಾಡು ಹರಡಿತ್ತು ಎಂದು ಇದರಲ್ಲಿ ಹೇಳಲಾಗಿದೆ. | |
ಕವಿರಾಜಮಾರ್ಗದಲ್ಲಿ ನೃಪತುಂಗನಿಗಿಂತಲೂ ಹಿಂದೆ ಇದ್ದ ಅನೇಕ ಕವಿಗಳ ಉಲ್ಲೇಖವಿದೆ. | |
ನೃಪತುಂಗ ರಾಜನ ಆಸ್ಥಾನದಲ್ಲಿದ್ದ ಶ್ರೀವಿಜಯನೆಂಬ ಕವಿಯಿಂದ `ಕವಿರಾಜಮಾರ್ಗ' ರಚಿತವಾಯಿತು ಎಂಬ ಅಭಿಪ್ರಾಯವು ಪ್ರಚಲಿತವಾಗಿದೆ. | |