ಕವನಗಳು>ಸಂಜೆ | ||
|| ಅನ್ನದಾತ || | ||
ಸಂತೋಷವಾಗಿರಬೇಕು ರೈತ ಅವನಲ್ಲವೇ ನಮ್ಮ ಅನ್ನದಾತ ಹಾಡುತ್ತವೆ ಹೊಗಳುತ್ತೇವೆ ನೀ ನಮ್ಮ ದೇಶದ ಬೆನ್ನೆಲೆಂಬೆಂದು ಅವನನ್ನು ನೋಡಿ ನಲಿಯುತ್ತೇವೆ | ||
ಭೂ ತಾಯಿಗೆ ಅವನುಡಿಸಿದ ಹಸಿರು ಸೀರೆಯನ್ನು ಆದರೆ ಮಳೆರಾಯನಿಗೆ ಅವನ ಮೇಲೇಕೆ ಕೋಪ...? ನೊಂದಿದ್ದಾನೆ ಏನೂ ಅರಿಯದ ರೈತ ಪಾಪ..! | ||
ಆಸರೆಗಾಗಿ ಯಮರಾಜನ ಕದ ತಟ್ಟುತ್ತಿದ್ದಾನೆ "ಅನ್ನದಾತ ಸುಖಿಭವೋ"ಎಂದು ಹರಸುವ ನಾವು ಅವನು ನೋವಿನಿಂದ ಕೂಗಿದಾಗ ಎಲ್ಲಿದ್ದೆವು..? ಕಾಡು ಕಡಿದು ನಾಡು ಮಾಡಿದೆವು ನಾವು ಆಧುನಿಕ ಯುಗದಲ್ಲಿ ಮೈ ಮರೆತೆವು. ಪರಿಣಾಮ ..? | ||
ಭೂ ತಾಯಿ ಕಂಗೆಟ್ಟಳು ಬಿಸಿಲ ಧಗೆಯಲ್ಲಿ...! ರೈತ ನಡೆದ ಸಾವಿನ ದಾರಿಯಲ್ಲಿ...!! ನಮಗೂ ಕೂಡ ಬಹುದೂರವಿಲ್ಲ ಆ ಕಾಲ ನೆನಪಿರಲಿ!! ಇನ್ನಾದರೂ ಎಚ್ಚೆತ್ತುಕೊಳ್ಳಿ ಓ ನವ ನಾಗರಿಕರೇ ಕಾಡು ಉಳಿಸಿ ಭೂತಾಯಿ ಮನವ ಒಲಿಸಿ | ||
- ವಾಣಿಶ್ರೀ ಬ. ತೊಗ್ಗಿ | ||
|| ~~~ || | ||